ಈ ಹಿಂದೆ ಬಾ ನಾಳೆ ಬಾ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಟಿ.ಕೆ.ಅರಸು ಈಗ ಮತ್ತೊಂದು ಚಿತ್ರವನ್ನು ಸದ್ದಿಲ್ಲದೆ ಆರಂಭಿಸಿದ್ದಾರೆ. ಅಲಾರಂ ಎಂಬ ಹೆಸರಿನ ಈ ಚಿತ್ರದ ಮಹೂರ್ತ ಸಮಾರಂಭ ೨೫ ರ ಸೋಮವಾರದಂದು ಹಾಸನದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನೇರವೇರಿತು. ಚಿತ್ರದ ಮೊದಲ ದೃಶ್ಯಕ್ಕೆ ಪೊಲೀಸ್ ಅಧಿಕಾರಿ ರಾಹುಲ್ ಕುಮಾರ್ ಕ್ಲಾಪ್ ಮಾಡಿದರೆ, ಕೆ.ಎಸ್. ಮಂಜುನಾಥ್ ಕ್ಯಾಮರಾ ಚಾಲನೆ ಮಾಡಿದರು. ಲವ್ ಮತ್ತು ಹಾರರ್ ಕಥಾನಕ ಹೊಂದಿರುವ ಚಿತ್ರಕ್ಕೆ ಹಾಸನ, ಸಕಲೇಶಪುರ, ಚಿಕ್ಕಮಗಳೂರು ಹಾಗೂ ಕುಶಾಲನಗರ ಸುತ್ತ ಮುತ್ತ ಚಿತ್ರೀಕರಣ ನಡೆಸಲಾಗುವುದು.
ಈ ಚಿತ್ರದಲ್ಲಿ ನಾಯಕಿ ತನ್ನ ಪ್ರಿಯಕರನಿಗೆ ಒಂದು ಅಲಾರಂ ವಾಚನ್ನು ಗಿಪ್ಟಾಗಿ ಕೊಡುತ್ತಾಳೆ. ಆದರೆ ನಾಯಕ ಅದನ್ನು ಅವಳ ಎದುರಿಗೆ ಬೇರೆಯವರಿಗೆ ಕೊಡುತ್ತಾನೆ ಆಗ ಮುನಿಸಿಕೊಂಡ ನಾಯಕಿ ಹೊರಟು ಹೋಗುತ್ತಾಳೆ ಆಕೆ ಎಲ್ಲಿಗೆ ಹೋದಳು, ಏನಾದಳು ಎಂಬುದನ್ನು ಕೆಲ ಭಯಾನಕ ಘಟನೆಗಳನ್ನು ಹೇಳುವ ಪ್ರಯತ್ನವು ಅಲಾರಂ ಚಿತ್ರದ ಕಥೆಯಾಗಿದೆ.
ಶ್ರೀ ಯೋಗೇಶ್ವರಿ ಆರ್ಟ್ಸ್ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಎ.ಟಿ.ರವೀಶ್ ಸಂಗೀತ, ಎಂ.ವಾಸನ್ ಛಾಯಾಗ್ರಹಣ, ಶ್ರೀಮಾನ್ ಸಾಹಿತ್ಯ, ಸ್ಟೈಲ್ಕಿಂಗ್ ವಿಲಿಯಂ ಲೋಬೋ ಸಾಹಸ, ಮಂಜು ಸಂಕಲನ, ಜಗ್ಗು ನೃತ್ಯ ನಿರ್ದೇಶನನವಿದೆ. ವಿಶ್ವನಾಥ್, ಲೋಕೆಶ್, ಜಗದೀಶ್, ವಂದಿತಾ, ಸಂಭ್ರಮ, ಶ್ರೇಯಾ, ಧರಣಿ, ಅರುಣ್ ಹಾಸನ್, ಮಂಜುನಾಥ್, ಲೋಬೋ, ಸನತ್ ಹಾಸನ್, ಅಶೋಕ್, ಮೊಬೈಲ್ ಚಂದ್ರು ಇನ್ನು ಮುಂತಾದವರ ತಾರಾಗಣವಿದೆ.